ಶ್ರೀಭಾರತಿ ಚಿತ್ರ ಲಾಂಛನದಲ್ಲಿ ನಿರ್ಮಾಣವಾಗಿದ್ದ ‘ನವಜೀವನ ಚಿತ್ರವನ್ನು ಶೃತಿ ಟ್ರ್ಯಾಕ್ಸ್ ಮ್ಯೂಸಿಕ್ ಅಂಡ್ ವೀಡಿಯೋ ಕಂಪನಿ ವಿಸಿಡಿ ಮುಖಾಂತರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈವರೆಗೂ ಹಲವಾರು ಭಕ್ತಿಗೀತೆಗಳ, ಜಾನಪದಗೀತೆಗಳ, ಪ್ರಸಿದ್ದ ನಾಟಕಗಳ ಮತ್ತು ಚಲನಚಿತ್ರಗಳ ವಿಸಿಡಿಯನ್ನು ಲೋಕಾರ್ಪಣೆ ಮಾಡಿರುವ ಶ್ರುತಿ ಟ್ರ್ಯಾಕ್ಸ್ ಕಂಪನಿ ಈಗ ಪರಿಶುದ್ದ ಮನೋರಂಜನೆಯುಳ್ಳ ಈ ಕೌಟುಂಬಿಕ ಚಿತ್ರದ ವಿಸಿಡಿಯನ್ನು ಬಿಡುಗಡೆಗೊಳಿಸಿ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.
ವಾದಿರಾಜ್ ಹಾಗೂ ಜವಹರ್ ನಿರ್ಮಿಸಿರುವ ಈ ಚಿತ್ರವನ್ನು ಪಿ.ಎಸ್.ಮೂರ್ತಿ ಸಂಕಲನ ಮಾಡುವುದರೊಂದಿಗೆ ನಿರ್ದೇಶಿಸಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ಸಂಯೋಜಿಸಿದ್ದಾರೆ. ಸೋರಟ್ ಅಶ್ವಥ್ ಗೀತರಚನೆ ಮಾಡಿ ಸಂಭಾಷಣೆ ಬರೆದಿದ್ದಾರೆ, ಅಶ್ವಥ್, ಪಂಡರೀಬಾಯಿ, ನರಸಿಂಹರಾಜು, ಸುದರ್ಶನ್, ಮೈನಾವತಿ, ವಾದಿರಾಜ್, ಚಿಂದೋಡಿಲೀಲಾ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಈ ಕೌಟುಂಬಿಕ ಚಿತ್ರದ ವಿಸಿಡಿಯ ಬೆಲೆ ಕೇವಲ ೩೮ರೂ ಮಾತ್ರ.